ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಇಂದು ಡಿಸೆಂಬರ್ 2 ರಾಷ್ಟ್ರೀಯ ಪರಿಸರ ಮಾಲಿನ್ಯ ಜಾಗೃತಿ ದಿನ
ವರದಿಗಾರರು : ಸಂತೋಷ್ ಶೆಟ್ಟಿ | ಸ್ಥಳ : Bengaluru | ದಿನಾಂಕ : 02-12-2025

ಇಂದು ಡಿಸೆಂಬರ್ 2 ರಾಷ್ಟ್ರೀಯ ಪರಿಸರ ಮಾಲಿನ್ಯ ಜಾಗೃತಿ ದಿನ

ಮಾನವನ ಆಸೆ ಎಲ್ಲೇ ಮೀರಿ ದುರಾಸೆಯ ಅಂಚಿನಲ್ಲಿ ಬಂದು ನಿಂತಿವೆ. ದಾರ್ಶನಿಕರು ಹೇಳಿರುವಂತೆ ಮಾನವ ಭೂಮಿ ಅಗೆದು ಗೆಣಸು ತಗೆಯುವ ಕಾಲದಲ್ಲಿ ಪ್ರಮಾಣಿಕನಾಗಿದ್ದ. ಯಾವಾಗ ಭೂಮಿ ಅಗೆದು ಚಿನ್ನ ತಗೆಯಲು ಆರಂಭಿಸಿದನೋ ಅಲ್ಲಿಂದಲೇ ಶುರುವಾಯ್ತು ನೋಡಿ ದುರಾಸೆಯ ಯುಗ.

ಅಂದಿನಿಂದ ಮಾನವನ ಲೋಭಿತನ ಆರಂಭವಾಗಿ ಇಂದಿಗೂ ಅದು ರಾಜಾರೋಷವಾಗಿ ನಡೆಯುತ್ತಲೇ ಬಂದಿದೆ‌. ಅದರ ಜೊತೆ ಜೊತೆಗೆ ಇದು ಪರಿಸರ ನಿಸರ್ಗದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತಿದ್ದು, ಬದುಕಲು ಅನುವು ಮಾಡಿಕೊಟ್ಟ ಪರಿಸರವನ್ನೆ ಆಳಲು ಹೊರಟಿರುವುದು ವಿಪರ್ಯಾಸ ಮತ್ತು ದುರಂತ.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಉಕ್ತಿ ಕೇಳಲೇನೋ ಚೆಂದ ಆದರೆ ನಾವೆಂದಾದರೂ ಯೋಚಿಸಿದ್ದೇವಾ? ನಾಳೆನ ಪ್ರಜೆಗಳಿಗೆ ಈ ಪರಿಸರ ನಿಸರ್ಗ ಎಷ್ಟು ಅನಿವಾರ್ಯವೆಂದು.?? ಇಲ್ಲ ಖಂಡಿತ ಇಲ್ಲ ಹಾಗೆ ಯೋಚಿದ್ದೆ ಆದರೆ ಇಂದು ನಾವು ಪರಿಸರ ಜಾಗೃತಿ ದಿನವನ್ನು ಆಚರಿಸಬೇಕಾದ ಅನಿವಾರ್ಯತೆ ಬರುತ್ತಿರಲಿಲ್ಲ. ಈ ಕುರಿತು ಸಾಕಷ್ಡು ಚಲನಚಿತ್ರಗಳು ಬಂದಿವೆ‌ ಅದರಲ್ಲೂ ಮುಖ್ಯವಾಗಿ ನಟ ನಿರ್ದೇಶಕ ಪರಿಸರವಾದಿ ಸುರೇಶ್ ಹೆಬ್ಳಿಕರ್ ಪರಿಸರದ ಕುರಿತು ಸಾಕಷ್ಡು ಜಾಗೃತಿ ಅಭಿಯಾನ ನಡೆಸಿದ್ದಾರೆ. 1998 ರಲ್ಲಿ ಇಕೋ-ವಾಚ್ ಎಂಬ ಎನ್ ಜಿ ಓ ಸಂಸ್ಥೆಯನ್ನ ಸ್ಥಾಪಿಸಿ ಪರಿಸರ ಮತ್ತು ನಿಸರ್ಗ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಲೇ ಬರುತ್ತಿದ್ದಾರೆ. ಆದರೆ ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನೆ ದ್ವಂಸ ಮಾಡುವ ,ಮಾಡುತ್ತಿರುವವರಿಗೇನು ಕಡಿಮೆ ಇಲ್ಲ . ಇಂದು ಜ್ವಲಂತ ಸಾಕ್ಷಿಯಾಗಿ ಕಾಣುತ್ತಿರುವ ಪ್ರಕೃತಿ ವಿಕೋಪ, ಅಕಾಲಿಕ ಮಳೆ ಹವಮಾನ ವೈಪರಿತ್ಯಕ್ಜೆ ಮೂಲ ಕಾರಣವೇ ಪರಿಸರ ನಾಶ. ಪ್ರಕೃತಿ ವಿಲೋಪಕ್ಕೆ ಶಪಿಸುವ ಮನುಷ್ಯನಿಗೆ ಸ್ವತಃ ತಾನು ಮಾಡಿರುವ ಪರಿಸರ ದ್ರೋಹದ ಕುರಿತು ಯಕಃಶಿತ್ ಪಶ್ಚಾತಪವಿಲ್ಲ.

ಹೇಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೋ ಅದೇ ರೀತಿಯಲ್ಲಿ ಈಗ ಪರಿಸರ ಉಳಿವಿಗಾಗಿ ಹೋರಾಡುವ ಕಾಲ ಸನಿಹಿತವಾಗಿದೆ. ಜಾಗತಿಕ ತಾಪಮಾನದ ಕುರಿತು ವಿಶ್ವದೆಲ್ಲಡೆ ಪರಿಸರ ಜಾಗೃತಿ ಅಭಿಯಾನ ಆರಂಭವಾಗಿದೆ. ಮಾನವ ನಿರ್ಮಿತ ಕೃತಕ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪರಿಸರದ ಕುರಿತು ಕಳವಳ ವ್ಯಕ್ತಪಡಿಸುವ ದಿಗ್ಗಜರು ಆಚೆ ಪರಿಸರಗಳ ಮೇಲೆ ಕ್ರೌರ್ಯ ಎಸೆಗುತ್ತಲೇ ಬಂದಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಪರಿಸರ ಹಾನಿಗೊಳಿಸುವ ಕಾರ್ಯ ಮಾತ್ರ ಸುಸೂತ್ರವಾಗಿ ಸಾಗುತ್ತಲೇ ಇವೆ. ಕೇವಲ ಔಪಚಾರಿಕತೆಯಿಂದ ಕೂಡಿರದ ಪರಿಸರ ಮಾಲಿನ್ಯ ಜಾಗೃತಿ ಪ್ರತಿದಿನವೂ ಆಚರಿಸುವಂತಾಗಲಿ. ಕೊನೆಯ ಪಕ್ಷ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಒದಗಿಸುವ ಪುಣ್ಯದ ಕೆಲಸ ನಮ್ಮಿಂದಲೇ ಆಗಬೇಕಿದೆ.

ಇತರೆ ಸುದ್ದಿಗಳು

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ, ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ

Views : 1719+

ಡಿಕೆ ಶಿವಕುಮಾರ್ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಖಾತೆ ?

Views : 1949+

ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿದಂತೆ ನಾಲ್ವರ ಸಾವು

Views : 4412+

ಸಿಎಂ ಆದ ಬಳಿಕ ಡಿಕೆ ಶಿವಕುಮಾರ್ 6 ಬಂಪರ್ ಘೋಷಣೆ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ಫ್ರೀ!

Views : 4590+

ಮೊನಾಲಿಸಾ ಪ್ರಬುದ್ಧಳಾಗಿದ್ದಾಳೆ – ಪತಿಗೆ ಟ್ರಾನ್ಸಿಟ್ ಬೇಲ್‌ ಮಂಜೂರು ಮಾಡಿದ ಕೇರಳ ಹೈಕೋರ್ಟ್

Views : 4611+

ನೂತನ ಸಿಎಂಗೆ ಇಚ್ಛಾಶಕ್ತಿ ಕೊರತೆ ಇದೆ: ಸಿ.ಟಿ.ರವಿ

Views : 4690+

ದೇಶದ ಶ್ರೀಮಂತ ಮುಖ್ಯಮಂತ್ರಿಯಾಗಿ ಹೊರಹೊಮ್ಮಲಿದ್ದಾರೆ ಡಿಕೆಶಿ

Views : 7169+

ಇರಾನ್ ಮೇಲೆ ಅಮೆರಿಕ ವಾಯುದಾಳಿ! ರಕ್ಷಣಾತ್ಮಕ ದಾಳಿಗೆ ನಿಯಂತ್ರಣ ಕೇಂದ್ರ ಉಡೀಸ್ ...

Views : 7650+

ದಾವಣಗೆರೆಯ ಕೆ ಟಿ ಜಿ ನಗರ ಅವ್ಯವಸೆಯ ಆಗರ ! ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು

Views : 7688+

ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯ ಅಭಿವೃದ್ಧಿ ಕಾಣಲಿ: ಅರವಿಂದ್ ಬೆಲ್ಲದ್

Views : 12883+

ಸಂಪುಟ ರಚನೆಗೆ ಕ್ಷಣಗಣನೆ. ಡಿಕೆಶಿ, ಸಿದ್ದು ದೆಹಲಿಗೆ...

Views : 13007+

ಸತತ 2ನೇ ಬಾರಿ ಐಪಿಎಲ್ ಟ್ರೋಫಿ ಮುಡಿಗೇರಿಸಿಕೊಂಡ RCB...

Views : 13282+

ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....

Views : 13303+

ರಾಜ್ಯದಲ್ಲಿ ಮೇಜರ್​​ ಸರ್ಜರಿಗೆ ಮುಂದಾದ ‘ಕೈ’ ಕಮಾಂಡ್​​...! ಮುಂದಿನ ಸಿ ಎಂ ಯಾರು ?

Views : 27271+

ಚಾಮುಂಡಿ ತಾಯಿ ಮುಂದೆ ಕ್ಷಮೆ ಬೇಡಿದ ರಣ್ವೀರ್ ಸಿಂಗ್...

Views : 30309+

ಅಂಚೆ ಕಚೇರಿಗೆ ಬಂದ ಸ್ನಾಕ್ಸ್ ಬಾಕ್ಸ್‌ನಲ್ಲಿತ್ತು 3 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ!

Views : 30329+

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆಗೆ ಮುಹೂರ್ತ ನಿಗದಿ: ಜೂ. 18ರಂದು 7 ಸ್ಥಾನಗಳಿಗೆ ಎಲೆಕ್ಷನ್...

Views : 30358+

ಭಾಗ್ಯಶ್ರೀ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ , ನೀಟ್ ಬರೆದಿದ್ದ ವಿದ್ಯಾರ್ಥಿನಿ ಪಿಯುಸಿಯಲ್ಲೇ ಫೇಲ್!

Views : 33362+

ಟ್ರಂಪ್ ಪುತ್ರಿ ಇವಾಂಕಾ ಹತ್ಯೆಗೆ ಸಂಚು...!

Views : 33367+

ವಾಹನ ಸವಾರರಿಗೆ ಬಿಗ್ ಶಾಕ್ ! ಸತತ 4ನೇ ಭಾರಿ ತೈಲ ಬೆಲೆ ಏರಿಕೆ ...

Views : 33489+

ಬಿಗ್ ಬಾಸ್ ಸ್ಪರ್ದಿ ನಿರೂಪಕಿ ಜಾಹ್ನವಿ ಜೆಡಿಎಸ್ ಗೆ ಸೇರ್ಪಡೆ ...!

Views : 33582+

ಗಂಡನ ಪ್ರಾಣ ತೆಗೆದ ಹೆಂಡತಿಯ ಕಳ್ಳಾಟ ಬಯಲು ....! ಅನೈತಿಕ ಸಂಬಂಧಕ್ಕೆ ಗಂಡ ಬಲಿ

Views : 33613+

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ! ಹತ್ತು ದಿನದಲ್ಲಿ 3 ನೇ ಭಾರಿ ಏರಿಕೆ

Views : 39159+

ಬೆಂಗಳೂರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಮಾನವ ಸರಪಳಿ ಪ್ರತಿಭಟನೆಗೆ ಪೊಲೀಸರ ಬ್ರೇಕ್!

Views : 39248+