ಹಿಮಾಚಲದಲ್ಲಿ ಭಯಾನಕ ಅಪಘಾತ! ಪ್ರಪಾತಕ್ಕೆ ಬಿದ್ದ ಕಾರ್ ....
ಹಿಮಾಚಲದಲ್ಲಿ ಭಯಾನಕ ಅಪಘಾತ ಸಂಭವಿಸಿದೆ . ಪ್ರಪಾತಕ್ಕೆ ಬಿದ್ದ ಟ್ಯಾಕ್ಸಿಯಲ್ಲಿ ಬೆಂಗಳೂರಿನ ಕುಟುಂಬ ಸೇರಿ 8 ಪ್ರವಾಸಿಗರು ಸಾವಿಗೀಡಾಗಿದ್ದಾರೆ . ಅಪಘಾತ ನಡೆದ ಸ್ಥಳ ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಪಂಗಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ.ಬೈರಾಗಢ್-ಪಂಗಿ-ಸಾಚ್ ಪಾಸ್ ರಸ್ತೆಯ ಕಾpricingಲಾಬನ್ ಬಳಿ ಟ್ಯಾಕ್ಸಿ (ಇನ್ನೋವಾ ಕಾರು) ಪ್ರಪಾತಕ್ಕೆ ಉರುಳಿದೆ. ಕಾರಿನಲ್ಲಿದ್ದ ಚಾಲಕ ಸೇರಿ ಎಲ್ಲಾ 8 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಮೃತರಲ್ಲಿ ಬೆಂಗಳೂರಿನ ಒಂದು ಕುಟುಂಬ ಮತ್ತು ಛತ್ತೀಸ್ಗಢದ ಮತ್ತೊಂದು ಕುಟುಂಬದ ಪ್ರವಾಸಿಗರು ಸೇರಿದ್ದಾರೆ.ಇವರೊಂದಿಗೆ ಸ್ಥಳೀಯ ಪ್ರವಾಸಿ ಟ್ಯಾಕ್ಸಿ ಚಾಲಕ ಕೂಡ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ .ಜಿಪಿಎಸ್ ಟ್ರ್ಯಾಕಿಂಗ್ ನೆರವು ಪಡೆದು ಪತ್ತೆ ಹಚ್ಚಲಾಗಿತು . ಈ ಪ್ರವಾಸಿಗರು ಪ್ರಯಾಣಿಸುತ್ತಿದ್ದ ವಾಹನವು ಶುಕ್ರವಾರದಿಂದ ನಾಪತ್ತೆಯಾಗಿತ್ತು. ವಾಹನದ ಮಾಲೀಕರು ಜಿಪಿಎಸ್ (GPS) ಮೂಲಕ ಟ್ರ್ಯಾಕ್ ಮಾಡಿದಾಗ ಕಾpricingಲಾಬನ್ ಬಳಿ ಒಂದೇ ಸ್ಥಳದಲ್ಲಿ ವಾಹನದ ಲೊಕೇಶನ್ ತೋರಿಸುತ್ತಿತ್ತು. ಇದರಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.ರಕ್ಷಣಾ ಕಾರ್ಯಾಚರಣೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಆಡಳಿತ ಮತ್ತು ಪೊಲೀಸರು ಧಾವಿಸಿದ್ದು, ಅತ್ಯಂತ ಆಳವಾದ ಕಂದಕದಿಂದ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ.ಚಂಬಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ವಿಜಯ್ ಸಕ್ಲಾನಿ ಮತ್ತು ಹೆಚ್ಚುವರಿ ಡೆಪ್ಯೂಟಿ ಕಮಿಷನರ್ ಅಮಿತ್ ಮೆಹ್ರಾ ಅವರು ಘಟನೆಯನ್ನು ಖಚಿತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.