ಶಾಸಕ ಮುನಿರತ್ನಗೆ ಬಿಗ್ ರಿಲೀಫ್ ! ನಾಲ್ವರು ಆರೋಪಿಗಳಿಗೆ ಖುಲಾಸೆ
ಆರ್ ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ ಸಿಕ್ಕಿದೆ. ಶಾಸಕರಿಗೆ ನಕಲಿ ಬಿಲ್ಲು ಪ್ರಕರಣದಲ್ಲಿ ದೊಡ್ಡ ಮಟ್ಟದ ನಿರಾಳತೆ ದೊರಕಿದೆ. ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಮುಂದುವರಿದಿದ್ದ ಈ ಪ್ರಕರಣದಲ್ಲಿ ಇದೀಗ ನ್ಯಾಯಾಲಯ ಮುನಿರತ್ನ ಸೇರಿದಂತೆ ನಾಲ್ವರು ಆರೋಪಿಗಳಿಗೆ ಖುಲಾಸೆ ನೀಡಿದೆ. ಈ ತೀರ್ಪಿನ ಹಿನ್ನಲೆ ಅವರ ಮೇಲೆ ಇದ್ದ ಕಾನೂನುಬದ್ಧ ಒತ್ತಡ ಕಡಿಮೆಯಾಗಿದೆ. ಇದರಿಂದ ಮುನಿರತ್ನಗೆ ಸ್ವಲ್ಪ ಸಮಾಧಾನ ಸಿಕ್ಕಿದೆ. ಮುನಿರತ್ನ ಸೇರಿ ನಾಲ್ವರ ವಿರುದ್ದ ಬಿಎಂಟಿಎಫ್ ನಲ್ಲಿ ಕೇಸ್ ದಾಖಲಾಗಿತ್ತು. ಪ್ರಕಾಶ್ ಕುಮಾರ್, ವೈ ಎಮ್ ಮುನಿರಾಜು, ಹರೀಶ್ ಹಾಗೂ ಮುನಿರತ್ನ ವಿರುದ್ಧದ ಕೇಸ್ ಇದಾಗಿದ್ದು, ಇದೀಗ ಈ ಪ್ರಕರಣವನ್ನು ಕೋರ್ಟ್ ಖುಲಾಸೆಗೊಳಿಸಿದೆ. ಈ ಪ್ರಕರಣದ ಹಿನ್ನೆಲೆಯನ್ನು ನೋಡಿದರೆ, 2008-09ರ ಸಾಲಿನಲ್ಲಿ ನಡೆದಿದ್ದ ಕೆಲ ಕಾಮಗಾರಿಗಳ ಬಿಲ್ಲುಗಳನ್ನು ಕುರಿತು ನಕಲಿ ದಾಖಲೆ ಮಾಡಲಾಗಿದೆ ಎಂಬ ಆರೋಪ ಹೊರಬಿದ್ದಿತ್ತು. ಈ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಬಿಲ್ಲುಗಳು ನಿಜವಲ್ಲ, ಕೃತಕವಾಗಿ ಸಿದ್ಧಪಡಿಸಲಾಗಿದೆ ಎಂಬ ಶಂಕೆ ಆಧಾರದ ಮೇಲೆ ತನಿಖೆ ಆರಂಭಗೊಂಡಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಬಿಎಂಟಿಎಫ್ ನಲ್ಲಿ ಕೇಸ್ ದಾಖಲಾಗಿತ್ತು.