ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಇಂದು ಜನವರಿ 12, ಸ್ವಾಮಿ ವಿವೇಕಾನಂದರ 163ನೇ ಜನ್ಮದಿನ"
ವರದಿಗಾರರು : ಮಮತಾ | ಸ್ಥಳ : Bengaluru | ದಿನಾಂಕ : 12-01-2026

ಇಂದು ಜನವರಿ 12, ಸ್ವಾಮಿ ವಿವೇಕಾನಂದರ 163ನೇ ಜನ್ಮದಿನ"

ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯಬೇಕೆಂದರೆ ಸ್ವಾಮಿ ವಿವೇಕಾನಂದರನ್ನು ಓದಿ' ಎಂದು ಕವಿ ರವೀಂದ್ರನಾಥ ಠಾಗೂರರು ಹೇಳುತ್ತಾರೆ. ವಿವೇಕಾನಂದರ ಬದುಕೇ ಇಡೀ ಭಾರತದ ಚಿತ್ರಣವಾಗಿದೆ. ಅವರ ಜೀವನದಲ್ಲಿ ಘಟಿಸಿದ ಪ್ರಸಂಗಗಳು ಯಶೋಗಾಥೆಯಷ್ಟೇ ಅಲ್ಲ ದಾರಿ ದೀಪವೂ ಹೌದು.

ಇಂದು ಜನವರಿ 12, ಸ್ವಾಮಿ ವಿವೇಕಾನಂದರ 163ನೇ ಜನ್ಮದಿನ. ವಿಶ್ವವನ್ನೇ ಬೆರಗುಗೊಳಿಸಿದ ಭಾರತದ ವೀರ ಸನ್ಯಾಸಿಯ ಜನ್ಮದಿನವನ್ನು 'ರಾಷ್ಟ್ರೀಯ ಯುವ ದಿನ'ವನ್ನಾಗಿ ಆಚರಿಸಲಾಗುತ್ತದೆ. ಭಾರತದತ್ತ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿವೆ.

ತಾಯಿಗೆ ದೂರುಗಳ ಮಾಲೆ ವಿವೇಕಾನಂದರಿಗೆ ಬಾಲ್ಯದಲ್ಲಿತಾಯಿ 'ವೀರೇಶ್ವರ' ಎಂದು ಹೆಸರಿಟ್ಟರು. ಬಂಗಾಳಿಯಲ್ಲಿ ಬೀರೇಶ್ವರ. ಸ್ನೇಹಿತರು ಪ್ರೀತಿಯಿಂದ ಅವನನ್ನು 'ಬಿಲೇ' ಎಂದು ಕರೆಯುತ್ತಿದ್ದರು. ಶಾಲೆಗೆ ಸೇರಿಸುವಾಗ ಅವನ ಹೆಸರನ್ನು ಔಪಚಾರಿಕವಾಗಿ ನರೇಂದ್ರನಾಥ ದತ್ತ ಎಂದು ಬದಲಿಸಲಾಯಿತು.

ಶಾಲೆಯಲ್ಲಿಎಲ್ಲರೂ ಅವನನ್ನು ನರೇನ್‌ ಎಂದು ಕರೆದರು. ಬಿಲೇ ಚೂಟಿಯಾದ ಬುದ್ಧಿಶಾಲಿ ಮಗು, ತುಂಟ. ಶ್ರೀಕೃಷ್ಣ ಮಗುವಾಗಿದ್ದಾಗ ಯಶೋದೆಗೆ ಅವನ ಮೇಲೆ ಹೇಗೆ ದೂರುಗಳು ಬರುತ್ತಿದ್ದವೋ ಹಾಗೆಯೇ ಬಿಲೆಯ ತುಂಟತನದ ಮೇಲೆಯೂ ತಾಯಿ ಭುವನೇಶ್ವರಿಯ ಹತ್ತಿರ ದೂರುಗಳು ಬರುತ್ತಿದ್ದವು. ಅದಕ್ಕೇ ಅವನ ಮಿತ್ರರು ಅವನಿಗೆ 'ಪಗಲಾ ಬಿಲೇ' (ಹುಚ್ಚು ಬಿಲೆ) ಎಂದು ಅಡ್ಡ ಹೆಸರಿಟ್ಟಿದ್ದರು. ಇತನ ಚೇಷ್ಟೆ ತಾಳಲಾರದೇ ತಾಯಿ ಭುವನೇಶ್ವರಿ ದೇವಿ, ''ಶಿವನನ್ನು ಮಗನಿಗಾಗಿ ಕೇಳಿಕೊಂಡೆ. ಅವನು ತನ್ನ ತುಂಟ ರಾಕ್ಷಸನನ್ನು ಕಳುಹಿಸಿದ್ದಾನೆ,'' ಎಂದು ತಮಾಷೆಯಾಗಿ ಹೇಳುತ್ತಿದ್ದಳು.

ನನಗೂ ಇಂಗ್ಲೀಷ್‌ ಬರುತ್ತೆ! ಒಂದು ಸಲ ರಜಪುಟಾನದಲ್ಲಿರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅವರ ಜೊತೆ ಇಬ್ಬರು ಆಂಗ್ಲರು ಪ್ರಯಾಣಿಸುತ್ತಿದ್ದರು. ವಿವೇಕಾನಂದರನ್ನು ಮೂಢ ಎಂದು ತಿಳಿದು ಅವರು ತಮ್ಮ ಭಾಷೆಯಲ್ಲಿ ಮಾತನಾಡುತ್ತಾ ಗೇಲಿ ಮಾಡಿದರು. ಇದನ್ನು ಕೇಳಿಯೂ ಅರ್ಥಮಾಡಿಕೊಳ್ಳದಿದ್ದ ಹಾಗೆ ವಿವೇಕಾನಂದರು ಸುಮ್ಮನಿದ್ದರು.

ಮುಂದಿನ ರೈಲು ನಿಲ್ದಾಣದಲ್ಲಿಇನ್ನೊಬ್ಬ ಬ್ರಿಟಿಷ್‌ ಅಧಿಕಾರಿ ಬಂದು ವಿವೇಕಾನಂದರನ್ನು ಗುರುತಿಸಿ, ''ಏನಾದರೂ ಬೇಕೇ?,'' ಎಂದು ಕೇಳಿದಾಗ ಅವರು ಇಂಗ್ಲಿಷಿನಲ್ಲಿ ತಮಗೆ ಕುಡಿಯಲು ನೀರು ಬೇಕೆಂದು ಕೇಳಿದರು. ಆಗ ಗೇಲಿ ಮಾಡಿದ್ದ ಆಂಗ್ಲಸಹಪ್ರಯಾಣಿಕರು ತಮ್ಮ ನಡವಳಿಕೆಗೆ ತಾವೇ ನಾಚಿಕೊಂಡು ಕ್ಷಮೆಯಾಚಿಸಿದರು. ಮಗು ಬೇಕೆಂದವಳಿಗೆ ತಾವೇ ಮಗುವಾದರು !

ವಿವೇಕಾನಂದರಿಂದ ಪ್ರಭಾವಿತರಾಗಿದ್ದ ವಿದೇಶಿ ಮಹಿಳೆಯೊಬ್ಬರು ಸನ್ಯಾಸಿಯಾಗಿದ್ದರೂ ಸಹ ಅವರನ್ನು ವಿವಾಹವಾಗಿ ಅವರಂಥ ಗುಣಗಳಿರುವ ಮಗುವನ್ನು ಪಡೆಯುವ ಆಸೆಯನ್ನು ವ್ಯಕ್ತಪಡಿಸಿದಳು. ಆಗ ವಿವೇಕಾನಂದರು ನಾನೇ ನಿಮ್ಮ ಮಗು ಭಾವಿಸಿ ಎಂದು ಹೇಳುವ ಮೂಲಕ ಆ ಮಹಿಳೆಯನ್ನು ಚಕಿತರನ್ನಾಗಿಸಿ ಆಕೆಯ ಆಸೆಯನ್ನು ಪೂರ್ಣಗೊಳಿಸಿ, ತಮಗಿರುವ ಅಲೌಕಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿತ್ವವನ್ನು ತೆರೆದಿಟ್ಟರು.

1893ರಲ್ಲಿಅಮೆರಿಕಕ್ಕೆ ಭೇಟಿ ನೀಡಿದ್ದ ಸ್ವಾಮಿ ವಿವೇಕಾನಂದರು ಕೇಸರಿ ವಸ್ತ್ರ ಧರಿಸಿ ಶಿಕಾಗೊ ನಗರದ ಪ್ರಮುಖ ರಸ್ತೆಗಳಲ್ಲಿಓಡಾಡಿದರು. ಅಮೆರಿಕನ್ನರಿಗದು ಸಂಪೂರ್ಣ ಹೊಸತು. ಹಾಗಾಗಿ ದಾರಿಯಲ್ಲಿಒಬ್ಬ ಮಹಿಳೆ ತನ್ನೊಂದಿಗಿದ್ದ ಪತಿಯ ಕಿವಿಯಲ್ಲಿಪಿಸುಗುಟ್ಟಿದಳು. ಆ ಮಹಿಳೆ ''ನನಗನ್ನಿಸುತ್ತೆ ಈ ವ್ಯಕ್ತಿ ಒಬ್ಬ ಸಂಭಾವಿತ ಎನಿಸುತ್ತಿಲ್ಲ,'' ಎಂದಳು. ಈ ಮಾತು ವಿವೇಕಾನಂದರ ಕಿವಿಗೆ ತಾಕಿತು. ಕೂಡಲೇ ವಿನಮ್ರರಾಗಿ ಪ್ರತಿಕ್ರಿಯಿಸಿದ ಅವರು, ''ಕ್ಷಮಿಸಿ ಮೇಡಂ, ನಿಮ್ಮ ದೇಶದಲ್ಲಿಒಬ್ಬ ವ್ಯಕ್ತಿಯನ್ನು ಸಂಭಾವಿತನನ್ನಾಗಿಸಲು ದರ್ಜಿ ಬೇಕು. ಆದರೆ ನನ್ನ ದೇಶದಲ್ಲಿವ್ಯಕ್ತಿತ್ವವೊಂದೇ ಸಂಭಾವಿತನನ್ನು ನಿರ್ಧರಿಸುತ್ತದೆ,'' ಎಂದರು.

ಇಂಗ್ಲೆಂಡಿನಲ್ಲಿವಿವೇಕಾನಂದರನ್ನು ಭೇಟಿಯಾದ ಮಾರ್ಗರೆಟ್‌ ನೋಬಲ್‌ ಎಂಬ ಯುವತಿ ಸನಾತನ ಧರ್ಮದ ಸೆಳೆತಕ್ಕೆ ಸಿಕ್ಕಿ ವಿವೇಕರ ಶಿಷ್ಯೆಯಾಗಿ ನಿವೇದಿತಾ ಎಂಬ ಭಾರತೀಯ ಹೆಸರಿಟ್ಟುಕೊಂಡು ಸಿಸ್ಟರ್‌ ನಿವೇದಿತಾ ಎಂಬ ಹೆಸರಿನಲ್ಲಿಭಾರತೀಯಳೇ ಆಗಿಹೋದರು. ಫ್ರಾನ್ಸ್‌ನ ಖ್ಯಾತ ನಟಿಯಾದ ಸಾರಾ ಬರ್ಮಹಾರ್ಡಿಟ್‌ 1896ರಲ್ಲಿಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತಗಳಿಂದ ಪ್ರೇರಣೆಗೊಂಡು ಪಾಶ್ಚಾತ್ಯ ದೇಶಗಳಲ್ಲಿಭಾರತೀಯ ತತ್ವಶಾಸ್ತ್ರ ಮತ್ತು ವೇದಾಂತವನ್ನು ಪರಿಚಯಿಸುವಲ್ಲಿಆಸಕ್ತಿ ಹೊಂದಿದರು. ಸುಭಾಷ್‌ಚಂದ್ರ ಬೋಸ್‌, ಅರವಿಂದೋ ಘೋಷ್‌, ಭಾಘ್‌ ಜತಿನ್‌, ಮಹಾತ್ಮ ಗಾಂಧಿ, ರವಿಂದ್ರನಾಥ ಠಾಗೋರ್‌, ಚಕ್ರವರ್ತಿ ರಾಜಗೋಪಾಲಾಚಾರಿ, ಜವಾಹರಲಾಲ್‌ ನೆಹರು, ಬಾಲ ಗಂಗಾಧರ ತಿಲಕ್‌, ಜಗದೀಶ್‌ ಚಂದ್ರ ಬೋಸ್‌, ಆಯನಿ ಬೆಸಂಟ್‌, ರೊಮಿನ್‌ ರೊಲಾಂಡ್‌ ಸೇರಿದಂತೆ ವಿಶ್ವಾದ್ಯಂತ ವಿವೇಕಾನಂದರ ಪ್ರಭಾವಕ್ಕೆ ಒಳಗಾದ ಗಣ್ಯರ ಪಟ್ಟಿಯಲ್ಲಿದ್ದಾರೆ.

ಇತರೆ ಸುದ್ದಿಗಳು

ನಾಪತ್ತೆಯಾಗಿದ್ದ ಶ್ರೀನಂದಾ ಶವ ಪತ್ತೆ!2000 ಅಡಿ ಆಳದ ಕಣಿವೆಯಲ್ಲಿ ಸಿಕ್ಕ ಮೃತದೇಹ

Views : 1092+

‘ಗ್ಯಾರಂಟಿ’ ಲೆಕ್ಕ ಕೊಡಿ ಎಂದ ಚುನಾವಣೆ ಆಯೋಗ ವಿರುದ್ದ ಗುಡುಗಿದ ಸಿ ಎಂ

Views : 4140+

ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸಿಮ್ ಹತ್ಯೆಗೈದ ಇಸ್ರೇಲ್ ?

Views : 4181+

ಯುದ್ಧದ ಸಂಘರ್ಷದಲ್ಲಿ ಶುಭಸುದ್ದಿ ! ದೇಶದಲ್ಲಿ ಇನ್ಮುಂದೆ LPG ಕೊರತೆ ಇರಲ್ಲ?

Views : 4238+

ಮಾಜಿ ಸದಸ್ಯ ಯೋಗೀಶ್ ಕೊಲೆ ಪ್ರಕರಣ ಏಪ್ರಿಲ್ 15ಕ್ಕೆ ಮುಂದೂಡಿಕೆ...

Views : 4340+

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ! ಬಸ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿ

Views : 4388+

ಆಹಾರ ಸಂಗ್ರಹ ಗೋದಾಮಿನಲ್ಲಿ ಬೆಂಕಿ ಅವಘಡ ! ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮ

Views : 4420+

ಅನಂತ್ ಅಂಬಾನಿ ಹುಟ್ಟುಹಬ್ಬದ ಪ್ರಯುಕ್ತ ದೇಗುಲದಲ್ಲಿ ವಿಶೇಷ ಪೂಜೆ

Views : 4464+

ಕದನ ವಿರಾಮದ ಖುಷಿಪಟ್ಟವರಿಗೆ ಶಾಕ್ ಕೊಟ್ಟ ಇರಾನ್‌ ಹಾರ್ಮುಜ್‌ !

Views : 4512+

ಬಾಯ್ಸ್ ಹಾಸ್ಟೆಲ್‌ ಬಳಿ ಡ್ರಗ್ಸ್‌ ಮಾರುತ್ತಿದ್ದ ಆರೋಪಿಗಳನ್ನು ಬಂದಿಸಿದ ಯಲಹಂಕ ಪೊಲೀಸರು ...

Views : 4525+

ಪ್ರೇಯಸಿಯ ಆತ್ಮಹತ್ಯೆ ಬಳಿಕ ಪ್ರಿಯಕರನೂ ನೇಣಿಗೆ ಶರಣು ! ಕರಣ ತಿಳಿದು ಬಂದಿಲ್ಲ

Views : 4599+

ವಿರಾಟ್ ಕೊಹ್ಲಿ ಧುರಂಧರ್ 2 ಚಿತ್ರ ನೋಡಿದ ಬಳಿಕ ಸಿನಿಮಾ ಕಲೆಕ್ಷನ್ ಹೆಚ್ಚಿದೆಯೇ ?

Views : 4659+

ಚಂದ್ರದ್ರೋಣ ಪರ್ವತ ಸರಣಿಯಲ್ಲಿ ಕೇರಳದ ಅಪ್ರಾಪ್ತೆ ನಾಪತ್ತೆ!

Views : 6879+

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೇಕ್ ಇಟ್ ಪುಷ್ಪವತಿ ಖ್ಯಾತಿಯ ನಿಮಿಕಾ ರತ್ನಾಕರ್

Views : 6942+

ಏಪ್ರಿಲ್ 9ಕ್ಕೆ ಘೋಷಣೆಯಾಗಲಿದೆ ದ್ವಿತೀಯ ಪಿಯುಸಿ ಫಲಿತಾಂಶ...

Views : 6993+

ದುಬಾರಿ ಮತ್ತು ಐಷಾರಾಮಿ ಬಂಗಲೆಯನ್ನು ತವರು ಮನೆ ಉಡುಗೊರೆಯಾಗಿ ಪಡೆದ ರಶ್ಮಿಕಾ

Views : 7049+

ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್‌ನಲ್ಲಿ ಅಪಘಾತ ! ಚಾಲಕ ಸಾವು

Views : 7210+

ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ! ಜಾಲ ಭೇದಿಸಿದ DRI; ₹5 ಕೋಟಿ ಮೌಲ್ಯದ 3.3 ಕೆಜಿ ಚಿನ್ನ ವಶ

Views : 7238+

ಜನ ವಿಶ್ವಾಸ ವಿಧೇಯಕ 2026 ಅಂಗೀಕಾರ : ಸಣ್ಣ ತಪ್ಪುಗಳಿಗೆ ದಂಡವಷ್ಟೇ ಶಿಕ್ಷೆಯಿಲ್ಲಾ ...

Views : 7368+

ತೆರಿಗೆ ಕಟ್ಟದ ಹೊರರಾಜ್ಯದ ವಾಹನಗಳಿಗೆ ಬೆಂಗಳೂರು ನಗರವೊಂದರಲ್ಲೇ 54.6 ಕೋಟಿ ರೂ ಸಂಗ್ರಹ!

Views : 7549+

ಸಿನಿಮಾ ಅಪ್ಡೇಟ್ : ಬಿಲ್ಲ ರಂಗ ಬಾಷಾ ಸಿನಿಮಾ ಅಪ್ಡೇಟ್ ಏನಿದೆ ?

Views : 9752+

ಜಯಮೃತ್ಯುಂಜಯ ಸ್ವಾಮೀಜಿ ಮೇಲೆ ಲೈಂಗಿಕ ಕಿರುಕುಳ ಆರೋಪ !

Views : 9917+

ಬಾಂಗ್ಲಾದ ಮೊದಲ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಅರೆಸ್ಟ್‌

Views : 9978+

ಯೂರಿಯಾ ಖರೀದಿಸಲು ರೈತರಿಗೆ ಗುರುತಿನ ಚೀಟಿ ಕಡ್ಡಾಯ ! ಕೃಷಿ ಜಂಟಿ ನಿರ್ದೇಶಕ ಕಿರಣ್ ಕುಮಾರ್

Views : 10149+