ಜಮೀರ್ ಖಾನ್ ಗೆ ಸಂಕಷ್ಟ ! ಸಿ ಎಂ ಆಪ್ತರನ್ನೇ ಟಾರ್ಗೆಟ್ ಮಾಡಲಾಗ್ತಿದ್ಯಾ ?
ಬೆಂಗಳೂರು : ದಾವಣಗೆರೆ ದಂಗಲ್ ರಾಜ್ಯ ಕಾಂಗ್ರೆಸ್ನಲ್ಲಿ ಬಿರುಗಾಳಿ ಎಬ್ಬಿಸಿದೆ. ಫಲಿತಾಂಶ ಬರುವ ಮುನ್ನವೇ ಪ್ರಚಾರದಲ್ಲಿ ನಡೆದ ಕೆಲ ವಿಚಾರಗಳ ಬಗ್ಗೆ ವರದಿ ಪಡೆದ ಹೈಕಮಾಂಡ್ ಕೈ ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಇಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರನ್ನೇ ಟಾರ್ಗೆಟ್ ಮಾಡಲಾಗ್ತಿದ್ಯಾ ಎನ್ನುವ ಪ್ರಶ್ನೆ ಮೂಡಿದೆ. ಮೊದಲು ಕೆ.ಎನ್. ರಾಜಣ್ಣ ಸಚಿವ ಸ್ಥಾನದಿಂದ ವಜಾ ಆದ್ರು. ನಿನ್ನೆ ಪರಿಷತ್ ಸದಸ್ಯ ನಸೀರ್ ಅಹಮದ್ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಆಗಿದ್ದಾರೆ. ಇದೀಗ ಜಮೀರ್ಗೂ ಸಂಕಷ್ಟ ಎದುರಾಗಿದೆ. ಸಿದ್ದರಾಮಯ್ಯ ಪರ ನಿಂತವರೇ ಟಾರ್ಗೆಟ್ ಆಗಿದ್ದು, ಒಬ್ಬರಾಗಿಯೇ ಹಿಂದೆ ಸರಿಯುತ್ತಿದ್ದಾರೆ. ಆಪ್ತರನ್ನ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಕೂಡ ಹರಸಾಹಸಪಡ್ತಿದ್ದಾರೆ. ರಾಜಣ್ಣ, ನಾಸೀರ್ ಬಳಿಕ ಇದೀಗ ಜಮೀರ್ಗೂ ಢವಢವ ಶುರುವಾಗಿದ್ದು, ಸಿಎಂ ಜೊತೆ ಸಭೆ ಮೇಲೆ ಸಭೆ ಮಾಡ್ತಿದ್ದಾರೆ. ಹೈಕಮಾಂಡ್ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಸಚಿವ ಜಮೀರ್ ಖಾನ್, ಸಿಎಂ ಸಿದ್ದರಾಮಯ್ಯ ಅವರ ಮೊರೆ ಹೋಗಿದ್ದಾರೆ. ಅಲ್ಪಸಂಖ್ಯಾತ ನಾಯಕರ ರಾಜೀನಾಮೆಗೆ ಜಮೀರ್ ಪ್ರಚೋದನೆ ನೀಡಿದ್ದಾರೆಂದು ಗಂಭೀರ ಆರೋಪ ಕೇಳಿಬಂದಿದ್ದು, ಹೈಕಮಾಂಡ್ ಫುಲ್ ಗರಂ ಆಗಿದೆ.