ಹನುಮ ಜಯಂತಿ ಯಾವಾಗ ಆಚರಿಸಬೇಕು ? ಗೊಂದಲಕ್ಕೆ ಇಲ್ಲಿದೆ ಉತ್ತರ ...
ಹನುಮ ಜಯಂತಿ ಯಾವಾಗ ಎನ್ನುವ ಗೊಂದಲ ನಿಮಗೆ ಇದ್ದೀಯಾ ? ಭಾರತೀಯ ಸಂಸ್ಕೃತಿಯಲ್ಲಿ ಹನುಮ ಜಯಂತಿಯು ಕೇವಲ ಒಂದು ಹಬ್ಬವಲ್ಲ ಅದು ಅಚಲ ಭಕ್ತಿ ಮತ್ತು ಅಪ್ರತಿಮ ಸಾಹಸದ ಸಂಕೇತ. ಹನುಮಂತನನ್ನು ಭಕ್ತಿ, ಶಕ್ತಿ, ಧೈರ್ಯ ಮತ್ತು ಕರ್ಮ ಜ್ಞಾನದ ಮೂರ್ತರೂಪವೆಂದು ಪೂಜಿಸಲಾಗುತ್ತದೆ. ವಾಯುದೇವನ ಮಗನಾದ್ದರಿಂದ ಅವನನ್ನು ಮಾರುತಿ, ಆಂಜನೇಯ ಮತ್ತು ಪವನಸುತ ಎಂಬ ದಿವ್ಯ ನಾಮಗಳಿಂದ ಕರೆಯಲಾಗುತ್ತದೆ. ಹನುಮಾನ್ ಜಯಂತಿ ಏಪ್ರಿಲ್ 1 ಅಥವಾ 2 ಯಾವಾಗ ಎಂಬ ಗೊಂದಲ ಸಾಕಷ್ಟು ಜನರಲ್ಲಿದೆ. ಭಾರತೀಯ ಸಂಸ್ಕೃತಿಯಲ್ಲಿ ಹನುಮ ಜಯಂತಿಯು ಕೇವಲ ಒಂದು ಹಬ್ಬವಲ್ಲ, ಅದು ಅಚಲ ಭಕ್ತಿ ಮತ್ತು ಅಪ್ರತಿಮ ಸಾಹಸದ ಸಂಕೇತ. ಹನುಮಂತನನ್ನು ಭಕ್ತಿ, ಶಕ್ತಿ, ಧೈರ್ಯ ಮತ್ತು ಕರ್ಮ ಜ್ಞಾನದ ಮೂರ್ತರೂಪವೆಂದು ಪೂಜಿಸಲಾಗುತ್ತದೆ. ವಾಯುದೇವನ ಮಗನಾದ್ದರಿಂದ ಅವನನ್ನು ಮಾರುತಿ, ಆಂಜನೇಯ ಮತ್ತು ಪವನಸುತ ಎಂಬ ದಿವ್ಯ ನಾಮಗಳಿಂದ ಕರೆಯಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚೈತ್ರ ಮಾಸದ ಹುಣ್ಣಿಮೆ ತಿಥಿಯು ಏಪ್ರಿಲ್ 1 ರ ಬೆಳಗ್ಗೆ7.06 ರಿಂದ ಶುರುವಾಗಿ ಏಪ್ರಿಲ್ 2 ರ ಬೆಳಗ್ಗೆ 7. 41ಕ್ಕೆ ಕೊನೆಗೊಳ್ಳುವುದು. ಆದ್ದರಿಂದ ಈ ಪವಿತ್ರ ಹಬ್ಬವನ್ನು ಏಪ್ರಿಲ್ 2 ರಂದು ಭಕ್ತಿ ಸಡಗರದಿಂದ ಆಚರಿಸಲಾಗುತ್ತಿದೆ. ಹನುಮಂತನ ಜನ್ಮದ ಹಿಂದೆ ಒಂದು ರೋಚಕ ಕಥೆಯಿದೆ. ಅಂಜನಾದೇವಿ ಮತ್ತು ಕೇಸರಿ ದಂಪತಿಗಳು ಪುತ್ರ ಸಂತಾನಕ್ಕಾಗಿ ಶಿವನನ್ನು ಕುರಿತು ಕಠಿಣ ತಪಸ್ಸು ಮಾಡುತ್ತಾರೆ. ಅಂಜನಾದೇವಿಯ ಭಕ್ತಿಗೆ ಮೆಚ್ಚಿದ ಪರಶಿವನು ತನ್ನ ಅಂಶವನ್ನೇ ಮಗನಾಗಿ ನೀಡಲು ಅನುಗ್ರಹಿಸುತ್ತಾನೆ. ವಾಯುದೇವನು ಶಿವನ ದಿವ್ಯ ಶಕ್ತಿಯನ್ನು ಹೊತ್ತು ತಂದು ಅಂಜನಾದೇವಿಗೆ ತಲುಪಿಸಿದ ಕಾರಣ, ಹನುಮಂತನು ವಾಯುಪುತ್ರನಾಗಿ ಜನಿಸುತ್ತಾನೆ. ಈ ದಿನವನ್ನು ನಾವು ಹನುಮ ಜಯಂತಿಯನ್ನಾಗಿ ಆಚರಿಸಿ, ಆ ಮಹಾಶಕ್ತಿಯನ್ನು ಸ್ಮರಿಸುತ್ತೇವೆ.
ಇತರೆ ಸುದ್ದಿಗಳು