ಬೆಳಗಾವಿ ವಂಚನೆ ಪ್ರಕರಣದಲ್ಲಿ ನೂರಾರು ಕೋಟಿ ಹಣ ಪತ್ತೆ!
ಬೆಳಗಾವಿಯ ಶಿವಂ ಅಸೋಸಿಯೇಟ್ಸ್ (Shivam Associates) ಬಹುಕೋಟಿ ಹಗರಣದ ಪ್ರಮುಖ ಆರೋಪಿ ಶಿವಾನಂದ ನೀಲಣ್ಣನವರ್ನನ್ನು ಬೆಳಗಾವಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ದಿನಗಳ ಕಾಲ ಸಿಐಡಿ (CID) ಕಸ್ಟಡಿಗೆ ಒಪ್ಪಿಸಿದೆ. ಬೆಳಗಾವಿಯ 4,500 ಕೋಟಿ ರೂ. ಮಹಾವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ, ಆರೋಪಿಯ 15 ಖಾತೆಗಳನ್ನು ಫ್ರೀಜ್ ಮಾಡಿದೆ. ಹೈಪ್ರೊಫೈಲ್ ವಂಚನೆ ಪ್ರಕರಣದ ಇತ್ತೀಚಿನ ಪ್ರಮುಖ ಅಪ್ಡೇಟ್ಗಳು ಇಲ್ಲಿವೆ. 10 ದಿನಗಳ ಕಾಲ ಸಿಐಡಿ ತೀವ್ರ ವಿಚಾರಣೆಸಿಐಡಿ ಡಿಐಜಿ ಭೇಟಿ ಪ್ರಕರಣದ ಗಂಭೀರತೆ ಪರಿಗಣಿಸಿ ಸಿಐಡಿ ಡಿಐಜಿ ಡಾ. ಭೀಮಾಶಂಕರ್ ಗುಳೇದ್ ಅವರು ಖುದ್ದಾಗಿ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿ ತನಿಖೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಅಂತರರಾಜ್ಯ ತನಿಖೆ ಆರೋಪಿಯು ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ ಸೇರಿದಂತೆ ಇತರೆ ರಾಜ್ಯಗಳಲ್ಲೂ ವ್ಯವಹಾರ ನಡೆಸಿರುವುದರಿಂದ, ಹಣದ ಹರಿವನ್ನು ಪತ್ತೆಹಚ್ಚಲು ಸಿಐಡಿ ತಂಡ ಆ ರಾಜ್ಯಗಳಿಗೂ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಲಿದೆ. ನ್ಯಾಯಾಲಯದಲ್ಲಿ ಆರೋಪಿ ಹೇಳಿಕೆ ಮತ್ತು ಜಡ್ಜ್ ಪ್ರತಿಕ್ರಿಯೆ"ಜನರಿಗೆ ನಾನೇ ಬೇಕು": ವಿಚಾರಣೆ ವೇಳೆ ಆರೋಪಿ ಶಿವಾನಂದ, 35,000 ಹೂಡಿಕೆದಾರರಿಗೆ ಹಣ ಬೇಡ, ನಾನೇ ಬೇಕು" ಎಂದು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾನೆ.ನ್ಯಾಯಾಧೀಶರ ಗರಂ: ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಹಣ ಲೂಟಿ ಮಾಡಿ ಓಡಿಹೋದ ಇಂತಹ ಹಗರಣಗಳ ಇತಿಹಾಸ ನೋಡಿಯೇ ಸರ್ಕಾರ ಕಠಿಣ ಕಾನೂನು ತಂದಿದೆ. ಮುಗ್ಧ ಹೂಡಿಕೆದಾರರ ಹಿತರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಗರಂ ಆಗಿ ಬುದ್ಧಿ ಕಲಿಸಿದ್ದಾರೆ. ವಂಚನೆಯ ಜಾಲ ಮತ್ತು ಮುಟ್ಟುಗೋಲುಶೇ. 36 ರಷ್ಟು ಬಡ್ಡಿಯ ಆಮಿಷ 1 ಲಕ್ಷ ರೂಪಾಯಿ ಡೆಪಾಸಿಟ್ ಇಟ್ಟರೆ ಪ್ರತಿ ತಿಂಗಳು ₹3,000 (ವಾರ್ಷಿಕ ಶೇ. 36) ಬಡ್ಡಿ ನೀಡುವುದಾಗಿ ನಂಬಿಸಿ ಮಾಜಿ ಸೈನಿಕರು, ರೈತರು ಸೇರಿದಂತೆ ಸುಮಾರು 35,000 ಕ್ಕೂ ಹೆಚ್ಚು ಜನರಿಗೆ ವಂಚಿಸಲಾಗಿದೆ.ಆಸ್ತಿ, ದಾಖಲೆಗಳ ಜಪ್ತಿ ಮಾಲ್ಮಾರುತಿ ಪೊಲೀಸ್ ಠಾಣೆಯಲ್ಲಿ BUDS ಹಾಗೂ KPID ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಕೋಟ್ಯಂತರ ಮೌಲ್ಯದ ಬಾಂಡ್ ಪೇಪರ್ಗಳು, ಐಷಾರಾಮಿ ಕಾರುಗಳು ಹಾಗೂ ನೂರಾರು ಕೋಟಿ ಹಣದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ.ಸಿಐಡಿ ತನಿಖೆ ಮುಂದುವರಿದಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನುಳಿದ ರಾಜಕೀಯ ಪ್ರಭಾವಿ ನಾಯಕರ ಲಿಂಕ್ಗಳು ಶೀಘ್ರದಲ್ಲೇ ಹೊರಬರುವ ಸಾಧ್ಯತೆ ಇದೆ.